ಸ್ಥಾಪನೆ, ಉದ್ದೇಶಗಳು
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಒಡೆಯರ್ ವಂಶದ ಸಾಧನೆಗಳು, ಆಡಳಿತ, ಸಮಾನತೆಗೆ ಪ್ರಯತ್ನಗಳು, ಜನಪರ-
ಸಾಮಾಜಿಕ ಕೆಲಸಕಾರ್ಯಗಳು ಇವುಗಳನ್ನು ಸಮಾಜದ ಮುಂದೆ ಇಡುವ ಮೂಲಕ ಉತ್ತಮ ಸಮಾಜದ ಸ್ಥಾಪನೆಗೆ
ಪ್ರಯತ್ನಿಸುವುದು.
1.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಇತಿಹಾಸದ ಬಗ್ಗೆ ಹೊಸ ಸಂಶೋಧನೆಗಳನ್ನು ನಡೆಸುವುದು.
2.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಮಾಜಿಕ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುವುದು.
3.ಮೈಸೂರು ಅರಸರ ಇತಿಹಾಸ, ಕಲೆ, ವಾಸ್ತುಶಿಲ್ಪ, ಆಡಳಿತ, ಸಮಸ್ಯೆಗಳು ಇತ್ಯಾದಿಗಳ ಬಗ್ಗೆ ಹೊಸ ಸಂಶೋಧನೆಗಳನ್ನು
ನಡೆಸುವುದು.
4.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮೈಸೂರು ಅರಸರ ಬಗೆಗಿನ ಹೊಸ ವಿಚಾರಸಂಕಿರಣ, ಕಾರ್ಯಾಗಾರ,
ಇತ್ಯಾದಿಗಳನ್ನು ನಡೆಸುವುದು.
5.ಪುಸ್ತಕ ಪ್ರಕಟಣೆ, ಸಂಶೋಧನಾಗ್ರAಥ ಪ್ರಕಟಣೆ, ವಿಶೇಷ ದತ್ತಿ ಉಪನ್ಯಾಸಗಳನ್ನು ಏರ್ಪಡಿಸುವುದು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅಧ್ಯಯನ ಪೀಠವು ದಿನಾಂಕ ೦೪/೦೮/೨೦೧೨ ರಲ್ಲಿ ಸ್ಥಾಪನೆಯಾಗಿದ್ದು ಈ ಪೀಠಕ್ಕೆ
೦೬/೦೭/೨೦೧೩ ರಿಂದ ಡಾ. ಶಲ್ವ ಪಿಳ್ಳೈ ಅಯ್ಯಂಗಾರ್, ಮುಖ್ಯಸ್ಥರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು
ಸಂಶೋಧನಾ ವಿಭಾಗ ರವರನ್ನು ಗೌರವ ನಿರ್ದಶಕರನಾಗಿ ಮಾಡಲಾಗಿದೆ.